ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಲಾಭದ ಆಸೆಗೆ ಬಿದ್ದ ಭದ್ರಾವತಿ ಕೃಷಿಕ, ಕಳೆದುಕೊಂಡಿದ್ದು 21 ಲಕ್ಷ, ಆಗಿದ್ದೇನು?

On: October 23, 2024 12:45 PM
Follow Us:
---Advertisement---

ಟೆಲಿಗ್ರಾಂ ಆಪ್‌ನಲ್ಲಿ ಮೆಸೇಜ್‌ ಮಾಡಿ ಟ್ರಾವೆಲ್ಸ್‌ ಗ್ರೂಪ್‌ಗೆ ಹಣ ಹೂಡಿಕೆ (Investment) ಮಾಡಿದರೆ, ಶೇ.30ರಷ್ಟು ಕಮಿಷನ್‌ ಮತ್ತು ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ಭರವಸೆ ನೀಡಿ 21.90 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಕೃಷಿಕರೊಬ್ಬರು (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾರೆ.

ಟ್ರಾವೆಲ್ಸ್‌ ಪಾರ್ಟ್‌ನರ್‌ ಇಂಡಿಯಾ, 91 ಕ್ಲಬ್‌ ಸರ್ವಿಸ್‌ ಎಂಬ ಹೆಸರು ಬಳಸಿ ಕೃಷಿಕರೊಬ್ಬರಿಗೆ ಮೆಸೇಜ್‌ ಕಳುಹಿಸಲಾಗಿತ್ತು. ಅಧಿಕ ಲಾಭದ ಆಸೆಗೆ ಬಿದ್ದ ಕೃಷಿಕ ತನ್ನ ಬ್ಯಾಂಕ್‌ ಖಾತೆ, ಫೋನ್‌ ಪೇ ಮತ್ತು ಚಕ್‌ ಮೂಲಕವು ಹಣ ಪಾವತಿಸಿದ್ದಾರೆ. ಸತತ ಒಂದು ತಿಂಗಳು ಹಂತ ಹಂತವಾಗಿ 21.90 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಭಾಂಶ ದೊರೆಯದಿದ್ದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ, ಅಮ್ರಿತ್‌ ಪಾಟೇಲ್‌, ದಿವ್ಯ ದರ್ಶಿನಿ, ಸಾರಿಕಾ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ಕೃಷಿಕ ದೂರು ನೀಡಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sathish munchemane

Join WhatsApp

Join Now

 

Read More