ಶಿವಮೊಗ್ಗ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ₹850 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. however, ಕಾಮಗಾರಿಗಳ ಗುಣಮಟ್ಟ ಕೊರತೆಯಿಂದ ಆಗುತ್ತಿರುವ ತೊಂದರೆಗಳ ಮೂಲಕ ಗಂಭೀರ ಪ್ರಶ್ನೆಗೆ ಗುರಿಯಾಗಿದೆ.
ಇದಕ್ಕೆ ಇತ್ತೀಚೆಗೆ ಆದಿಚುಂಚನಗಿರಿ ಶಾಲೆ ಮುಂಭಾಗದಲ್ಲಿ ಅಳವಡಿಸಿದ್ದ ಸಾಂಚಾರಿ ಸುರಕ್ಷಿತ ಕಂಬಗಳೇ ಉದಾಹರಣೆ.
ನಗರದ ವಿದ್ಯಾರ್ಥಿಗಳ ಮತ್ತು ಪಾದಚಾರಿಗಳ ಸುರಕ್ಷತೆಗೆ ಆಧುನಿಕ ಕಂಬಗಳನ್ನು ಅಳವಡಿಸಲಾಗಿದ್ದು, ಕೇವಲ ಎರಡು–ಮೂರು ವರ್ಷಗಳಲ್ಲೇ ಹಲವು ಕಂಬಗಳು ಮುರಿದು ಬಿದ್ದು, ಬೇರಿನಿಂದಲೇ ತೆಗೆಯುವಷ್ಟು ದುರ್ಬಲವಾಗಿದೆ.
ಇದು ಕಾಮಗಾರಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಿಲ್ಲವೇ ಎಂಬ ಪ್ರಶ್ನೆಗೆ ಕಾರಣವಾಗಿದೆ.
ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳೊಳಗೆ ಹಾನಿ ಕಂಡುಬಂದರೆ Defect Liability Period ಪ್ರಕಾರ, ಗುತ್ತಿಗೆದಾರರ ಮೇಲೆಯೇ ಹೊಣೆಗಾರಿಕೆ ಬರುವುದರಿಂದ, ಕಳಪೆ ಕೆಲಸಕ್ಕೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳು—
ಸ್ಮಾರ್ಟ್ ಸಿಟಿ ತಾಂತ್ರಿಕ ವಿಭಾಗ ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗ
ಪ್ರಾಜೆಕ್ಟ್ ನಿರ್ವಹಣಾ ಸಲಹಾ ತಂಡ (PMC)ಇವರೇ ಆಗಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ರಸ್ತೆ, ಪುಟಪಾತ್, ಯುಜಿಡಿ, ಬೀದಿ ಅಲಂಕಾರ, ಪೇವರ್ ಬ್ಲಾಕ್ ಸೇರಿದಂತೆ ಕೋಟ್ಯಂತರ ವೆಚ್ಚದ ಹಲವು ಯೋಜನೆಗಳು ಕೂಡ ಅಲ್ಪ ಅವಧಿಯಲ್ಲೇ ಹಾಳಾಗುತ್ತಿರುವುದು ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ವಿಶೇಷವಾಗಿ ಜೈಲ್ ರಸ್ತೆಯ ಪುಟಪಾತ್ ಮತ್ತು ಯುಜಿಡಿ ಕಾಮಗಾರಿಗಳು ಗುಣಮಟ್ಟದ ಕೊರತೆಯನ್ನು ಸ್ಪಷ್ಟಪಡಿಸುತ್ತಿವೆ.
850 ಕೋಟಿ ವೆಚ್ಚದ ‘ಅಭಿವೃದ್ಧಿ’ ಕೆಲಸಗಳೇ ಇಷ್ಟು ಬೇಗ ಕುಸಿಯುತ್ತಿರುವುದು ಸಾರ್ವಜನಿಕ ಹಣದ ದುರುಪಯೋಗವೋ ಎಂಬ ಗಂಭೀರ ಶಂಕೆಯನ್ನು ಹುಟ್ಟುಹಾಕಿದೆ. ಹೀಗಿರುವಾಗ ಜವಾಬ್ದಾರರ ವಿರುದ್ಧ ಕ್ರಮ, ಕಾಮಗಾರಿಗಳ ಮರುಪರಿಶೀಲನೆ ಮತ್ತು ಲೆಕ್ಕಪತ್ರಗಳ ಪಾರದರ್ಶಕತೆ—ನಗರ ನಿವಾಸಿಗಳ ಪ್ರಮುಖ ಬೇಡಿಕೆಯಾಗಿದೆ.








