ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ದಿಢೀರ್ ಭೇಟಿ! ಮೆಗ್ಗಾನ್ ಆಸ್ಪತ್ರೆಗೆ ಮಧು ಬಂಗಾರಪ್ಪ ಸರ್ಪ್ರೈಸ್ ಸರ್ಜರಿ!!   

On: July 21, 2025 12:49 PM
Follow Us:
---Advertisement---

ಶಿವಮೊಗ್ಗ – ಸೋಮವಾರ ಬೆಳಿಗ್ಗೆ  ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ!   ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೊರರೋಗಿಗಳ ವಿಭಾಗಕ್ಕೆ! ಒಂದೊಂದಾಗಿ:

ಮೂಳೆ-ಕೀಲು ವಿಭಾಗ

ಡಯಾಲಿಸಿಸ್ ಘಟಕ

ಚರ್ಮರೋಗ ವಿಭಾಗ

ಜನರಲ್ ಮೆಡಿಸಿನ್ ವಾರ್ಡ್

ಎಲ್ಲೆಡೆ  ಬೇಟಿ : “ಇವರು ಡಾಕ್ಟರ್ ಅಲ್ಲ.. ಸಚಿವ!”

ರೋಗಿಗಳ ಜೊತೆ ಮಾತು,

ನಾನ್-ಕ್ಲಿನಿಕಲ್ ಸಿಬ್ಬಂದಿಗಳ ನಡಿಗೆ ತಡೆದು, ಜನಪರ ವಿಚಾರಣಾ ಸಭೆ ನಡೆಯಿತು. ಜನ ಏನು ಹೇಳ್ತಾರೆ, ಆಸ್ಪತ್ರೆ ಹೇಗಿದೆ, ಎಲ್ಲವೂ  ಕೇಳಿದ ಮಧು ಬಂಗಾರಪ್ಪ – ಕೆಲವರು ಗಂಭೀರ ಪ್ರಶ್ನೆ ಕೇಳಿದ್ರು, ಉತ್ತರವಾಗಿ ಅಧಿಕಾರಿಗಳು ಯಥಾ ಶೈಲಿಯಲ್ಲಿ “ಪರಿಗಣಿಸಲಾಗುವುದು” ಅಂತಾ ಹಾರಿಕೆ ಉತ್ತರ.

 

ಆದರೆ, ಸಚಿವರ ಫಾರ್ಮುಲಾ ಸ್ಪಷ್ಟ:

ಹೊಸ OPD ಕೌಂಟರ್ ನಿರ್ಮಾಣಕ್ಕೆ ತಕ್ಷಣ ಅಂದಾಜು ಪತ್ರ ಸಿದ್ದಪಡಿಸಿ!

೫ ಡಯಾಲಿಸಿಸ್ ಯಂತ್ರಗಳು ಬೇಕು.

ಡಾರ್ಮೆಟರಿ ನಿರ್ಮಾಣಕ್ಕೆ ಪ್ರಸ್ತಾವನೆ ತಯಾರಿಸಿ!

ಸಾವು ಕಡಿಮೆ ಮಾಡಲು ಎಲ್ಲಾ ಕ್ರಮ ವಹಿಸಿರಿ.

ಹೊರ ಜಿಲ್ಲೆಗಳಿಂದ ಬರುವ ಗರ್ಭಿಣಿಯರ ವಿವರ ಸಿದ್ಧವಾಗಲಿ!

ವೆಂಟಿಲೇಟರ್‌ಗಳು, ಎನ್‌ಐಸಿಯು, ಎಂಸಿಹಚ್ ಬ್ಲಾಕ್, ಒಬಿಜಿ, ಪೀಡಿಯಾಟ್ರಿಕ್ ವಿಭಾಗ – ಎಲ್ಲರಲ್ಲೂ ನೀರು ಲೀಕೇಜ್ ಸಮಸ್ಯೆ? ಪಟ್ಟಿ ಸಿದ್ಧಗೊಳಿಸಿ!

ನಂತರ ಸಭೆ – ಅಧಿಕಾರಿಗಳೊಂದಿಗೆ ಸೀಮಿತವಲ್ಲ, ಮುಂದಿನ ತೀವ್ರತೆಯ ಪರಿಹಾರ ಸಭೆಗೆ ಡೇಟು ಫಿಕ್ಸ್:

೨೩-ಜುಲೈ-೨೫ – ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ನೇರ ಚರ್ಚೆ!

ಇದು ದಿಢೀರ್ ಭೇಟಿ ಅಲ್ಲ! ಇದು ಜನಜೀವನದ ಎಕ್ಸ್-ರೇ.

ಮಧು ಬಂಗಾರಪ್ಪ ಅವರ ಈ ಬಾಂಧವ್ಯ ರಾಜಕಾರಣದ ಡಾ.ಹೆಸ್ರು ಜನತೆಗೆ ರೋಗಿಗಳ ಕಡೆಗೆ ಹಿತದೃಷ್ಟಿ ತೋರಿಸುತ್ತಿದೆಯೇ?

ಅಥವಾ ಕೇವಲ ಒಂದು “ಪರೀಕ್ಷೆ” ಮಾತ್ರವೇ?

ಮುಂದಿನ ಹೆಜ್ಜೆ : ಸಚಿವರು ಹೇಳಿದ ದಿನಾಂಕಕ್ಕೆ ಸೂಕ್ತ ವರದಿ ಸಿದ್ಧವಾಗುತ್ತದೆಯೆ..?

ಆಶ್ವಾಸನೆಯ OPD, ಬಿಟ್ಟಿರುವ ವೈದ್ಯಕೀಯ ವ್ಯವಸ್ಥೆ ಯಥಾವತೆಯಾ..?

ಇನ್ನು ಮುಂದೆ ಮೆಗ್ಗಾನ್ ಆಸ್ಪತ್ರೆ…

ಔಷಧ ನೀಡುತ್ತದೋ? ಅಥವಾ ಶಬ್ಧದೋಶವೇ ಉಳಿಯುತ್ತದೋ?

ಕಾಲವೇ ಉತ್ತರಿಸಲಿ!

 

 

Sathish munchemane

Join WhatsApp

Join Now

 

Read More