ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಲಯನ್ ಸಫಾರಿ ಬಳಿ ಇಸುಜು ವಾಹನ ಡಿಕ್ಕಿ – ರಂಗನಾಥ್ ಟ್ರಾವೆಲ್ಸ್ ಮಾಲೀಕರ ರಂಗ ದುರ್ಮರಣ.!

On: October 2, 2025 12:41 PM
Follow Us:
---Advertisement---

ಶಿವಮೊಗ್ಗ: ಶಿವಮೊಗ್ಗದ ಲಯನ್ ಸಫಾರಿ ಬಳಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಹುಲ್ ಅಲಿಯಾಸ್ ರಂಗ (40) ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಆಯನೂರು ದಿಕ್ಕಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಇಸುಜು ಲಗೇಜ್ ವಾಹನ ರಾತ್ರಿ 11 ಗಂಟೆಯ ಸುಮಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ನಾಲ್ವರು–ಐವರು ಇದ್ದು, ಅಪಘಾತದಲ್ಲಿ ರಾಹುಲ್ ಅಲಿಯಾಸ್ ರಂಗ ಮೃತಪಟ್ಟಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಮೃತ ರಂಗ ವಿನೋಬ ನಗರ ನಿವಾಸಿ ಹಾಗೂ ರಂಗನಾಥ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು.  ರಂಗನಾಥ್ ಅವರ ಅಕಾಲಿಕ ಸಾವಿನಿಂದ  ವಿನೋಬ ನಗರದಲ್ಲಿ   ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ತುಂಗನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Sathish munchemane

Join WhatsApp

Join Now

 

Read More