ಶಿವಮೊಗ್ಗ – ಸೋಮವಾರ ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ! ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೊರರೋಗಿಗಳ ವಿಭಾಗಕ್ಕೆ! ಒಂದೊಂದಾಗಿ:
ಮೂಳೆ-ಕೀಲು ವಿಭಾಗ
ಡಯಾಲಿಸಿಸ್ ಘಟಕ
ಚರ್ಮರೋಗ ವಿಭಾಗ
ಜನರಲ್ ಮೆಡಿಸಿನ್ ವಾರ್ಡ್
ಎಲ್ಲೆಡೆ ಬೇಟಿ : “ಇವರು ಡಾಕ್ಟರ್ ಅಲ್ಲ.. ಸಚಿವ!”
ರೋಗಿಗಳ ಜೊತೆ ಮಾತು,
ನಾನ್-ಕ್ಲಿನಿಕಲ್ ಸಿಬ್ಬಂದಿಗಳ ನಡಿಗೆ ತಡೆದು, ಜನಪರ ವಿಚಾರಣಾ ಸಭೆ ನಡೆಯಿತು. ಜನ ಏನು ಹೇಳ್ತಾರೆ, ಆಸ್ಪತ್ರೆ ಹೇಗಿದೆ, ಎಲ್ಲವೂ ಕೇಳಿದ ಮಧು ಬಂಗಾರಪ್ಪ – ಕೆಲವರು ಗಂಭೀರ ಪ್ರಶ್ನೆ ಕೇಳಿದ್ರು, ಉತ್ತರವಾಗಿ ಅಧಿಕಾರಿಗಳು ಯಥಾ ಶೈಲಿಯಲ್ಲಿ “ಪರಿಗಣಿಸಲಾಗುವುದು” ಅಂತಾ ಹಾರಿಕೆ ಉತ್ತರ.
ಆದರೆ, ಸಚಿವರ ಫಾರ್ಮುಲಾ ಸ್ಪಷ್ಟ:
ಹೊಸ OPD ಕೌಂಟರ್ ನಿರ್ಮಾಣಕ್ಕೆ ತಕ್ಷಣ ಅಂದಾಜು ಪತ್ರ ಸಿದ್ದಪಡಿಸಿ!
೫ ಡಯಾಲಿಸಿಸ್ ಯಂತ್ರಗಳು ಬೇಕು.
ಡಾರ್ಮೆಟರಿ ನಿರ್ಮಾಣಕ್ಕೆ ಪ್ರಸ್ತಾವನೆ ತಯಾರಿಸಿ!
ಸಾವು ಕಡಿಮೆ ಮಾಡಲು ಎಲ್ಲಾ ಕ್ರಮ ವಹಿಸಿರಿ.
ಹೊರ ಜಿಲ್ಲೆಗಳಿಂದ ಬರುವ ಗರ್ಭಿಣಿಯರ ವಿವರ ಸಿದ್ಧವಾಗಲಿ!
ವೆಂಟಿಲೇಟರ್ಗಳು, ಎನ್ಐಸಿಯು, ಎಂಸಿಹಚ್ ಬ್ಲಾಕ್, ಒಬಿಜಿ, ಪೀಡಿಯಾಟ್ರಿಕ್ ವಿಭಾಗ – ಎಲ್ಲರಲ್ಲೂ ನೀರು ಲೀಕೇಜ್ ಸಮಸ್ಯೆ? ಪಟ್ಟಿ ಸಿದ್ಧಗೊಳಿಸಿ!
ನಂತರ ಸಭೆ – ಅಧಿಕಾರಿಗಳೊಂದಿಗೆ ಸೀಮಿತವಲ್ಲ, ಮುಂದಿನ ತೀವ್ರತೆಯ ಪರಿಹಾರ ಸಭೆಗೆ ಡೇಟು ಫಿಕ್ಸ್:
೨೩-ಜುಲೈ-೨೫ – ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ನೇರ ಚರ್ಚೆ!
ಇದು ದಿಢೀರ್ ಭೇಟಿ ಅಲ್ಲ! ಇದು ಜನಜೀವನದ ಎಕ್ಸ್-ರೇ.
ಮಧು ಬಂಗಾರಪ್ಪ ಅವರ ಈ ಬಾಂಧವ್ಯ ರಾಜಕಾರಣದ ಡಾ.ಹೆಸ್ರು ಜನತೆಗೆ ರೋಗಿಗಳ ಕಡೆಗೆ ಹಿತದೃಷ್ಟಿ ತೋರಿಸುತ್ತಿದೆಯೇ?
ಅಥವಾ ಕೇವಲ ಒಂದು “ಪರೀಕ್ಷೆ” ಮಾತ್ರವೇ?
ಮುಂದಿನ ಹೆಜ್ಜೆ : ಸಚಿವರು ಹೇಳಿದ ದಿನಾಂಕಕ್ಕೆ ಸೂಕ್ತ ವರದಿ ಸಿದ್ಧವಾಗುತ್ತದೆಯೆ..?
ಆಶ್ವಾಸನೆಯ OPD, ಬಿಟ್ಟಿರುವ ವೈದ್ಯಕೀಯ ವ್ಯವಸ್ಥೆ ಯಥಾವತೆಯಾ..?
ಇನ್ನು ಮುಂದೆ ಮೆಗ್ಗಾನ್ ಆಸ್ಪತ್ರೆ…
ಔಷಧ ನೀಡುತ್ತದೋ? ಅಥವಾ ಶಬ್ಧದೋಶವೇ ಉಳಿಯುತ್ತದೋ?
ಕಾಲವೇ ಉತ್ತರಿಸಲಿ!