ಶಿವಮೊಗ್ಗ: ಇಂದು ಬೆಳಿಗ್ಗೆ ವಿನೋಬನಗರದ ಮಾತೃಭೂಮಿ ಆಟೋ ನಿಲ್ದಾಣದ ಸಮೀಪದಲ್ಲಿ ಆಟೋ ಹಾಗೂ ರಾಪಿಡೋ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಚಾಲಕನನ್ನು ಮಂಡಲ್ಲಿನಿವಾಸಿ ವಾಲ್ವ ಎಂದು ಗುರುತಿಸಲಾಗಿದೆ.
ಸ್ಥಳೀಯರ ಹೇಳಿಕೆ ಪ್ರಕಾರ, ಎಪಿಎಂಸಿ ಕಡೆಗೆ ತೆರಳುತ್ತಿದ್ದ ವೇಳೆ, ಡಿಕ್ಕಿ ತಪ್ಪಿಸಲು ಚಾಲಕ ಆಟೋವನ್ನು ತಕ್ಷಣವೇ ತಿರುಗಿಸಲು ಯತ್ನಿಸುತ್ತಿದ್ದ ವೇಳೆ ಆತ ನಿಯಂತ್ರಣ ತಪ್ಪಿ ಆಟೋ ಕೆಳಗೆ ಬಿದ್ದು, ತಲೆಯ ಮೇಲೆ ಆಟೋ ಬಿದ್ದು ಸಾವನ್ನಪ್ಪಿದ್ದಾನೆ.
ಆಟೋದೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ.