ಈ ಹಿಂದೆ ಹರ್ಷ ಹಿಂದೂ ಕೊಲೆಯ ಸಮಯದಲ್ಲಿ ಕೊಲೆ ಆರೋಪಿಗಳು ಹರ್ಷನನ್ನ ಕೊಲೆ ಮಾಡುವ ಮುಂಚೆ ಸೂಳೆಬೈಲಿನಲ್ಲಿರುವ ಪೆಟ್ರೋಲ್ ಬಂಕ್ ವೊಂದರಲ್ಲಿ ಕಾರಿಗೆ ಡಿಸೇಲ್ ತುಂಬಿಸಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಪೆಟ್ರೋಲ್ ಪಂಪ್ ನ ಯುವಕನನ್ನ ಎನ್ಐಎ ಸಾಕ್ಷಿ ಮಾಡಿತ್ತು.
ಆತನಿಗೆ ಡಿ.12 ರಂದು ಎನ್ಐಎ ಹರ್ಷನ ಮರ್ಡರ್ ವಿಚಾರದಲ್ಲಿ ಕೋರ್ಟ್ ಇತ್ತು. ಪೆಟ್ರೋಲ್ ಬಂಕ್ ಗೆ ಬಂದ ಅಪರಿಚಿತ ವ್ಯಕ್ತಿ ಸಾಕ್ಷಿ ಹೇಳುವ ಯುವಕನ ಹೆಸರು ಕೇಳಿದ್ದಾನೆ. ಆತನಿಗೆ ಕೋರ್ಟ್ ಗೆ ಹಾಜರಾಗದಿರಲು ಹೇಳಿ ಎಂದು ದಮಕಿ ಹಾಕಿದ್ದ, ಆಹುಡುಗ ಈಗ ಇಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಸಹಪಾಠಿಗಳು ಹೇಳಿದಾಗ ವಾಪಾಸ್ ಹೋಗಿದ್ದ
ಈ ಪ್ರಕರಣ ಅಸಂಜ್ಞೆ ಪ್ರಕರಣ ದಾಖಲಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ತುಂಗನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು
ನೆನ್ನೆ ಎ-6 ಅಬ್ದುಲ್ ಖಾದರ್ ಜಿಲಾನಿ ಬೇಲ್ ಅರ್ಜಿವಿಚಾರಣೆ ಇತ್ತು ಹರ್ಷ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಮೇಲ್ಮನವಿ ಸಂ.313/2024 ಅನ್ನು ಹೈಕೋರ್ಟ್ನಲ್ಲಿ ಎನ್ಐಎ ನ್ಯಾಯಾಲಯದಿಂದ ಜಾಮೀನು ನಿರಾಕರಣೆ ಅರ್ಜಿ ಸಲ್ಲಿಸಿದ್ದರು,
ನೆನ್ನೆ ಎರಡೂ ಕಡೆಯ ವಾದವನ್ನು ಆಲಿಸಿದ ಗೌರವಾನ್ವಿತ ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿದೆ.
ಇದು ಗೌರವಾನ್ವಿತ ಹೈಕೋರ್ಟ್ ತಿರಸ್ಕರಿಸಿದ 2 ನೇ ಜಾಮೀನು ಅರ್ಜಿಯಾಗಿದೆ.