ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ವಿಶ್ವಹಿಂದೂ ಪರಿಷದ್‌ ಧರ್ಮ ಪ್ರಸಾರ ಪ್ರಮುಖ ಕೃಷ್ಣಮೂರ್ತಿ ಅವರ ನಿಧನ.!

On: July 28, 2025 3:45 PM
Follow Us:
---Advertisement---

ವಿಶ್ವಹಿಂದೂ ಪರಿಷದ್‌ ನಗರ ಧರ್ಮ ಪ್ರಸಾರ ಪ್ರಮುಖ ಕೃಷ್ಣಮೂರ್ತಿ (ಕಿಟ್ಟಿ) ಅವರ ನಿಧನ.!

ಶಿವಮೊಗ್ಗ: ವಿಶ್ವ ಹಿಂದು ಪರಿಷದ್‌ ನಗರದ ಧರ್ಮಪ್ರಸರ ಪ್ರಮುಖ ಕೃಷ್ಣಮೂರ್ತಿ (ವಯಸ್ಸು 42) ಅವರು ಹೃದಯಾಘಾತದಿಂದ ಇಂದು ದುರಂತವಾಗಿ ನಿಧನರಾಗಿದ್ದಾರೆ. ನಿತ್ಯ ಕ್ರಿಯಾಶೀಲ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಕೃಷ್ಣಮೂರ್ತಿ ಅವರು ನಗರದ ಗಾಂಧಿಬಜಾರ್‌ ಪ್ರದೇಶದಲ್ಲಿ ಬಂಗಾರದ ಕೆಲಸವನ್ನು ಮಾಡಿಕೊಂಡಿದ್ದರು. ತಮ್ಮ ಕೆಲಸದ ಜತೆಗೆ ಸಮಾಜ ಸೇವೆಯಲ್ಲೂ ಸತತವಾಗಿ ತೊಡಗಿದ್ದ ಅವರು, ಯುವಜನರಿಗೆ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ನಿರಂತರ ಶ್ರಮಿಸುತ್ತಿದ್ದರು.

ಅವರು ತೀವ್ರ ಹೃದಯ ನೋವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾದರು. ಅವರ ಅಕಾಲಿಕ ಸಾವಿನಿಂದ ಕುಟುಂಬ, ಬಂಧುಮಿತ್ರರು ಹಾಗೂ ವಿಶ್ವ ಹಿಂದು ಪರಿಷದ್‌ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಅವರು ತಮ್ಮ  ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬವನ್ನು ಅಗಲಿದ್ದಾರೆ.

ಅವರ ಧಾರ್ಮಿಕ ಕಳಕಳಿ, ರಾಷ್ಟ್ರೀಯ ಚಿಂತನೆ ಮತ್ತು ಸಮರ್ಪಿತ ಸೇವಾ ಮನೋಭಾವವು ನಗರದ ಹಲವರಲ್ಲಿ ಪ್ರೇರಣೆಯಾಗಿ ಉಳಿದಿದೆ. ಈ ಸಂದರ್ಭ ವಿವಿಧ ಹಿಂದೂ ಸಂಘಟನೆಗಳು, ಸ್ಥಳೀಯ ಸಂಘಸಂಸ್ಥೆಗಳು ಹಾಗೂ ನಾಗರಿಕರು ಶೋಕ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ಅಂತ್ಯಕ್ರಿಯೆ ಇಂದು ಸಂಜೆ ಕುಟುಂಬದ ಸದಸ್ಯರ ನೇತೃತ್ವದಲ್ಲಿ ನಗರದ ರೋಟರಿ ಚಿತಗಾರದಲ್ಲಿ ನಡೆಯಲಿದೆ.

ಕೃಷ್ಣಮೂರ್ತಿ ಕಿಟ್ಟಿ ಅವರ ಕಣ್ಣನ್ನು ಕುಟುಂಬದವರು ಸಿಮ್ಸ ಮೆಡಿಕಲ್ ಕಾಲೇಜ್ ಗೆ ದಾನ ಮಾಡಿದ್ದಾರೆ.

 

Sathish munchemane

Join WhatsApp

Join Now

 

Read More