ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಡಗಡಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.
ಗ್ರಾಮದ ಶ್ರೀಮತಿ ಹೇಮಾವತಿ ಕೋಂ ನಾಗರಾಜ್ (ವಯಸ್ಸು 45), ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿರುವವರ ವಾಸದ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಈ ದುರ್ಘಟನೆಯಲ್ಲಿ ಹೇಮಾವತಿಯ ಸಂಬಂಧಿಯಾದ ಶತಾಯುಷಿ ಸಿದ್ದಮ್ಮ (ವಯಸ್ಸು 100), ಕುಂಕೋವ ಗ್ರಾಮ, ಹೊನ್ನಾಳಿ ತಾಲೂಕು ಮೂಲದವರು ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಅವರ ಜೊತೆಯಲ್ಲಿ ಮಗಳು ಪಲ್ಲವಿ, ಅಳಿಯ ಪರಶುರಾಮ್ ಹಾಗೂ ಮೊಮ್ಮಗ ಚೇತನ್ (ವಯಸ್ಸು 2 ವರ್ಷ) ಇವರುಗಳಿಗೂ ಸಣ್ಣಪುಟ್ಟ ಗಾಯಗಳು ಸಂಭವಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೆಕಿದೆ.