ಗುಬ್ಬಿ :ವೈದ್ಯರ ನಿರ್ಲಕ್ಷ್ಯ ತನದ ಚಿಕಿತ್ಸೆ

0
14

ಸಾಂದರ್ಭಿಕ ಚಿತ್ರ

ಗುಬ್ಬಿ ( ತುಮಕೂರು ):

ತಾಲೂಕಿನ ಬಿಲೆಕಲ್ಲುಪಾಳ್ಯ ಗ್ರಾಮದ ರೇಣುಕಾ  (34) ಎಂಬ ಮಹಿಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ  ಮಂಗಳವಾರನಡೆಸುತಿದ್ದ ಸಂತಾನ ಹರಣ  ಶಾಸ್ತ್ರಚಿಕಿತ್ಸೆಯನ್ನ ವೈದ್ಯರು ಅರ್ಧದಲ್ಲಿ ನಿಲ್ಲಿಸಿ. ಹೋಳಿಗೆ ಹಾಕಿದ್ದಾರೆ ಇದರಿಂದ ತೊಂದರೆಗೀದಾದ ಮಹಿಳೆ ಪ್ರಾಣಪಯದಿಂದ ಪಾರಾಗಿದ್ದಾರೆ

ಆಸ್ಪತ್ರೆಯ ಶಾಸ್ತ್ರ ಚಿಕಿತ್ಸ  ಕೊಠಡಿಯಿಂದ ನೋವಿನಿಂದ ಕಿರುಚಡುವ ಶಬ್ದ ಕೇಳಿ ಬಂತು. ಕೊಠಡಿ ಹೊರಗೆ ನಿಂತಿದ್ದ ನಾವು ಒಳಗಡೆ  ಹೋಗಿ ನೋಡಿದಾಗ ರೇಣುಕಾಲ ಕೈ. ಕಾಲು. ಗಟ್ಟಿಯಾಗಿ ಹಿಡಿದುಕೊಂಡು ಶಾಸ್ತ್ರ ಚಿಕಿತ್ಸೆ ಮಾಡುತಿದ್ದರು ಎಂದು ಮಹಿಳೆಯ ಗಂಡ  ತಿಮ್ಮರಾಜು ಆರೋಪಿಸಿದ್ದಾರೆ

ಅರವಳಿಕೆ ಮದ್ದುನೀಡದೆ  ಶಾಸ್ತ್ರ ಚಿಕಿತ್ಸೆ ಮಾಡಿದ ಕಾರಣ ನೋವು ತಡೆದುಕೊಳ್ಳಲಾಗದೆ ನನ್ನ ಹೆಂಡತಿ ಕಿರುಚದಿದ್ದರೆ ನಾವು ಒಳಗೆ ಹೋಗಿ ಗಲಾಟೆ ಮಾಡಿದ ನಂತರ ಶಾಸ್ತ್ರ ಚಿಕಿತ್ಸೆ ನಿಲ್ಲಿಸಿ ನೋವನ್ನು ತಡೆದು ಕೊಳ್ಳಲು ಆಗುವುದಿಲ್ಲ ಎಂದು ಮೊದಲೇ ಹೇಳಬೇಕಲ್ಲವೇ ಎಂದು ನಮ್ಮ ಮೇಲೇಯೇ ವೈದ್ಯರು ಕೂಗಡಿದರು ಎಂದು ತಿಮ್ಮರಾಜು ತಿಳಿಸಿದರು.

ಮುಂಜಾಗ್ರೂತಾ ತೆಗೆದುಕೊಳ್ಳದೆ ವೈದ್ಯರು ನಿರ್ಲಕ್ಷ್ಯದಿಂದ  ಶಾಸ್ತ್ರ ಚಿಕಿತ್ಸೆ ಮಾಡಲು ಹೊರಟಿದ್ದಾರು. ಬೆಳಗ್ಗೆ ಚಿಕಿತ್ಸೆಗೂ ಮುನ್ನ 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಕೊಡಲು ಆಗುವುದಿಲ್ಲ ಎಂದು ಹೇಳಿದ್ದೆ  ಇದರಿಂದ ಕೋಪಗೊಂಡು ಈ ರೀತಿ ಮಾಡಿದ್ದಾರೆ ಎಂದು ರೇಣುಕಾಲ ಪತಿ ಆ ರೋಪಿಸಿದ್ದಾರೆ

‘ಅರವಳಿಕೆ ಮದ್ದು ಕೊಟ್ಟ ನಂತರವೇ ಶಾಸ್ತ್ರ ಚಿಕಿತ್ಸೆ ಮಾಡುತಿದ್ದೆವು. ಆದರೆ ಅರವಳಿಕೆ ಮದ್ದು ಸರಿಯಾಗಿ ಕೆಲಸ ಮಾಡಿಲ್ಲವೆಂದು ‘ಆಸ್ಪತ್ರೆಯ ವೈದ್ಯಧಿಕಾರಿ ಡಾ. Divakar ಬೇಜಾವಬ್ಧಾರಿ ತನದ ಸ್ಪಷ್ಟನೆ ನೀಡಿದರು