ಶಿವಮೊಗ್ಗ ನಗರದ ಶರಾವತಿ ನಗರದ ಪಾಂಡುರಂಗ ದೇವಾಲಯದ ಸಮೀಪ ನಿವಾಸಿಯಾದ ಶಶಾಂಕ್ (19) ಎಂಬ ಯುವಕ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುಮಾರು 8.30ರ ಸಮಯದಲ್ಲಿ ಸಾಗರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರು ಈ ಘಟನೆ ಸಂಭವಿಸಿದೆ.
ಶಶಾಂಕ್ ತನ್ನ ಸ್ನೇಹಿತ ತರುಣ್ ಜೊತೆ ಸುಜುಕಿ ಹಿಸ್ಟ್ರೋಮ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಹಿಂದೆ ಕೂತಿದ್ದ ಶೇಷಾಂಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಹನ ಚಲಾಯಿಸುತ್ತಿದ್ದ ತರುಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಶಶಾಂಕ್ ತಮ್ಮ ತಂದೆ-ತಾಯಿಗಳ ಏಕೈಕ ಪುತ್ರನಾಗಿದ್ದು, ಈ ದುರ್ಘಟನೆಯಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಸ್ಥಳೀಯರು ಹಾಗೂ ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ.






