ನೆನ್ನೆ ಮಧ್ಯರಾತ್ರಿ 2.00 ಗಂಟೆ. ಎಲ್ಲರಿಗೂ ನಿದ್ದೆ ಬಂದಿರುವಾಗ, ಕೆಲವು ನೀಚ ಶಕ್ತಿಗಳು ಎಚ್ಚರದಲ್ಲಿದ್ದರು. ಎಚ್ಚರದಲ್ಲಿರೋದಾದ್ರೆ ಓಕೆ, ಆದರೆ ಇವ್ರು ಎಚ್ಚರದಿಂದ ಕೊಳಚೆ ಕೆಲಸ ಮಾಡ್ತಿದ್ರು. ನಗರದ ಹೃದಯ ಭಾಗ, ಬಿ.ಎಚ್.ರಸ್ತೆಯ ಚರ್ಚ್ ಎದುರು, ಪ್ರಸಿದ್ಧ ವಿಷ್ಣು ಭವನ ಹೋಟೆಲ್ ಮುಂಭಾಗದಲ್ಲಿ ಪರಿಸರ ಪ್ರೇಮಿಗಳು ನೆಟ್ಟು ಪ್ರೀತಿಯಿಂದ ಬೆಳೆಸಿದ ಎರಡು ಬೃಹತ್ ಮರಗಳನ್ನು ವಿಕೃತ ಮನಸ್ಸುಳ್ಳವರು ಗರಗಸದಿಂದ ಕಡಿದು ಉರುಳಿಸಿದ್ದಾರೆ!
ಈ ಮರಗಳನ್ನು ಚಿಕ್ಕದಿಂದಲೇ ಪರಿಸರವಾದಿಗಳು ಬೆಳೆಸಿದ್ರು. ಹೋಟೆಲ್ ಮಾಲೀಕರು, ಅಂಗಡಿ ಮಾಲೀಕರು ಎಲ್ಲರೂ ಸಹ ಇವರು ಬೆಳೆಸಿದ ಮರಗಳಿಗೆ ನೀರು ಹಾಕೋದೊ ಎಲ್ಲಾ ತಮ್ಮ ಜವಾಬ್ದಾರಿ ಅಂದು ಬೆಳೆಸಿದ್ದರು.
ಈ ರೀತಿಯಾಗಿ ಬೆಳೆದು, ಹಾಯಾಗಿ ತಂಪು ನಿಡ್ತಿದ್ದ ಈ ಹಸಿರ ಬದಾಮಿ ಮರ ಈಗ ನೆಲಕ್ಕುರುಳಿದೆ!
ಯಾವ ಕಚ್ಚಾಡಾ ಸೋ,,,,, ಮಕ್ಕಳಿಗೆ : ಈ ಮರ ಕಣ್ಣಿಗೆ ಬೀಳ್ತಿತ್ತು? ಹೋಟೆಲ್ ಗಿರಾಕಿಗಳ ಅಡುಗೆ ಸ್ಮೆಲ್ ಮರದ ಸುಗಂಧದಿಂದ ಹಾಳಾಯಿತಾ? ಅಥವಾ ಈ ಮರ “ಸ್ಟ್ರೀಟ್ ಲೈಟ್” ಬೆಳಕಿಗೆ ಎನಾದರು ತೊಂದರೆ ಆಯಿತಾ.!?
ಈ “ರಾತ್ರಿಯ ಗಿಡಗಳ ಹಂತಕರು” ಯಾರು ಎಂಬುದು ಇನ್ನೂ ಸತ್ಯಾನ್ವೇಷಣೆಯಲ್ಲಿದೆ. ಆದರೆ ಪರಿಸರವಾದಿಗಳು ಸುಮ್ಮನಿಲ್ಲ. ಕೊಡಲಿ ಹಾಕಿದವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು, ಇದೊಂದು ಸಜ್ಜನಿಕರ ಪಟ್ಟು!
ಹೌದು, ಇಲ್ಲಿ ನಾವು ಮಾತನಾಡ್ತಿರುವದು ಕೇವಲ ಎರಡು ಮರಗಳ ಕುರಿತಲ್ಲ. ಇದು ಒಂದು ತತ್ವದ ಬಗ್ಗೆ. ಒಂದು ಸಮಾಜದ ನೈತಿಕ ಬಾಹ್ಯಭಾವದ ಬಗ್ಗೆ. ಪ್ರತಿದಿನವೂ ನಗರದಲ್ಲಿ ಹಲವಾರು ಹಸಿರು ಜೀವಗಳನ್ನು ನೆಲಕ್ಕುರುಳಿಸುತ್ತಾ, ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುತ್ತಿರುವ ಈ ತಂತ್ರ ಜಾಣ್ಮೆಗೆ ಯಾರು ಕಡಿವಾಣ ಹಾಕಬೇಕು?
ಈ ಘಟನೆ ನಡೆಯೋ ಸಮಯವೇ ನೋಡಿ – ರಾತ್ರಿ 2.00 ಗಂಟೆ! ಎಷ್ಟು ಭದ್ರತಾ ಕ್ಯಾಮೆರಾಗಳಿವೆ ಅಲ್ಲಿ?
ಆದರು ಯಾರ ಬಯವಿಲ್ಲದೇ ಈ ಗರಗಸದ ಗುಂಪು ನಮ್ಮನ್ನು ಮೂರನೆಯ ನಿದ್ರಾ ಸ್ಥಿತಿಗೆ ತಳ್ಳಿದಂತೆ, ತಮ್ಮ ಕೃತ್ಯ ನಡೆಸಿದೆ.
“ ಮರ ಕಡಿಯೋದು ಕಾನೂನು ಬಾಹಿರ” ಎಂಬ ಸತ್ಯ ತಿಳಿದಿಲ್ಲವೇ?
ಹಾಗದರೆ ಅರಣ್ಯ ಅಧಿಕಾರಿಗಳ ಬಯವಿಲ್ಲವೆ.? ಪೋಲಿಸ್ ಅಧಿಕಾರಿಗಳ ಸಹಾಕರ ಅರಣ್ಯ ಅಧಿಕಾರಿಗಳು ತೆಗೆದು ಕೋಂಡು ಹುಡುಕಿ ಹಿಡಿದು ಶಿಕ್ಷಿಸಬೇಕು. ಮರವನ್ನು ಹತ್ತಿರದಿಂದ ನೋಡಿದವನು, ಮರವನ್ನು ಆಶ್ರಯಿಸಿದ್ದ ಹಕ್ಕಿಯೂ ಈ ಪ್ರಕರಣದಲ್ಲಿ ಸಾಕ್ಷಿ ಕೊಡಬೇಕಾದ ಪರಿಸ್ಥಿತಿ ಬಂದಿದೆ!
ಇಲ್ಲಿ ಒಂದು ವಿಷಯ ಸ್ಪಷ್ಟ: ನಗರದ ಒಳಜೀವಕ್ಕೆ ಹಸಿರು ಬೇಕು. ಪರಿಸರ ಪ್ರೀತಿಗೆ ಪ್ರೋತ್ಸಾಹ ಬೇಕು. ಮರಗಳಿಗೆ ರಕ್ಷಣೆ ಬೇಕು. ಈ ಪ್ರಕರಣಕ್ಕೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಾಳೆ ನಗರದಲ್ಲಿ ಇರುವ ಮರ ರಾತ್ರಿಮಯವಗಾಬಹುದು.
ಹೀಗಾಗಿ, ಮರಗಳ ಹತ್ಯೆ ಇದೀಗ ಸಧ್ಯದ ಸೋಷಿಯಲ್ ಕ್ರೈಮ್ ಆಗಿದೆ!
ಪರಿಸರ ಹತ್ಯೆ ಇಲ್ಲಿಗೆ ಕೊನೆಗಾಣಲಿ. ಮರ ಬಿಟ್ಟು ರಸ್ತೆ, ದಾರಿ ಇಲ್ಲ!
ಮಧ್ಯರಾತ್ರಿ 2.00 ಗಂಟೆ. ಎಲ್ಲರಿಗೂ ನಿದ್ದೆ ಬಂದಿರುವಾಗ, ಕೆಲವು ನೀಚ ಶಕ್ತಿಗಳು ಎಚ್ಚರದಲ್ಲಿದ್ದರು. ಎಚ್ಚರದಲ್ಲಿರೋದಾದ್ರೆ ಓಕೆ, ಆದರೆ ಇವ್ರು ಎಚ್ಚರದಿಂದ ಕೊಳಚೆ ಕೆಲಸ ಮಾಡ್ತಿದ್ರು. ನಗರದ ಹೃದಯ ಭಾಗ, ಬಿ.ಎಚ್.ರಸ್ತೆಯ ಚರ್ಚ್ ಎದುರು, ಪ್ರಸಿದ್ಧ ವಿಷ್ಣು ಭವನ ಹೋಟೆಲ್ ಮುಂಭಾಗದಲ್ಲಿ ಪರಿಸರ ಪ್ರೇಮಿಗಳು ನೆಟ್ಟು ಪ್ರೀತಿಯಿಂದ ಬೆಳೆಸಿದ ಎರಡು ಬೃಹತ್ ಮರಗಳನ್ನು ವಿಕೃತ ಮನಸ್ಸುಳ್ಳವರು ಗರಗಸದಿಂದ ಕಡಿದು ಉರುಳಿಸಿದ್ದಾರೆ!
ಈ ಮರಗಳನ್ನು ಚಿಕ್ಕದಿಂದಲೇ ಪರಿಸರವಾದಿಗಳು ಬೆಳೆಸಿದ್ರು. ಹೋಟೆಲ್ ಮಾಲೀಕರು, ಅಂಗಡಿ ಮಾಲೀಕರು ಎಲ್ಲರೂ ಸಹ ಇವರು ಬೆಳೆಸಿದ ಮರಗಳಿಗೆ ನೀರು ಹಾಕೋದೊ ಎಲ್ಲಾ ತಮ್ಮ ಜವಾಬ್ದಾರಿ ಅಂದು ಬೆಳೆಸಿದ್ದರು.
ಈ ರೀತಿಯಾಗಿ ಬೆಳೆದು, ಹಾಯಾಗಿ ತಂಪು ನಿಡ್ತಿದ್ದ ಈ ಹಸಿರ ಬದಾಮಿ ಮರ ಈಗ ನೆಲಕ್ಕುರುಳಿದೆ!
ಯಾವ ಕಚ್ಚಾಡಾ ಸೋ,,,,, ಮಕ್ಕಳಿಗೆ : ಈ ಮರ ಕಣ್ಣಿಗೆ ಬೀಳ್ತಿತ್ತು? ಹೋಟೆಲ್ ಗಿರಾಕಿಗಳ ಅಡುಗೆ ಸ್ಮೆಲ್ ಮರದ ಸುಗಂಧದಿಂದ ಹಾಳಾಯಿತಾ? ಅಥವಾ ಈ ಮರ “ಸ್ಟ್ರೀಟ್ ಲೈಟ್” ಬೆಳಕಿಗೆ ಎನಾದರು ತೊಂದರೆ ಆಯಿತಾ.!?
ಈ “ರಾತ್ರಿಯ ಗಿಡಗಳ ಹಂತಕರು” ಯಾರು ಎಂಬುದು ಇನ್ನೂ ಸತ್ಯಾನ್ವೇಷಣೆಯಲ್ಲಿದೆ. ಆದರೆ ಪರಿಸರವಾದಿಗಳು ಸುಮ್ಮನಿಲ್ಲ. ಕೊಡಲಿ ಹಾಕಿದವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು, ಇದೊಂದು ಸಜ್ಜನಿಕರ ಪಟ್ಟು!
ಹೌದು, ಇಲ್ಲಿ ನಾವು ಮಾತನಾಡ್ತಿರುವದು ಕೇವಲ ಎರಡು ಮರಗಳ ಕುರಿತಲ್ಲ. ಇದು ಒಂದು ತತ್ವದ ಬಗ್ಗೆ. ಒಂದು ಸಮಾಜದ ನೈತಿಕ ಬಾಹ್ಯಭಾವದ ಬಗ್ಗೆ. ಪ್ರತಿದಿನವೂ ನಗರದಲ್ಲಿ ಹಲವಾರು ಹಸಿರು ಜೀವಗಳನ್ನು ನೆಲಕ್ಕುರುಳಿಸುತ್ತಾ, ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುತ್ತಿರುವ ಈ ತಂತ್ರ ಜಾಣ್ಮೆಗೆ ಯಾರು ಕಡಿವಾಣ ಹಾಕಬೇಕು?
ಈ ಘಟನೆ ನಡೆಯೋ ಸಮಯವೇ ನೋಡಿ – ರಾತ್ರಿ 2.00 ಗಂಟೆ! ಎಷ್ಟು ಭದ್ರತಾ ಕ್ಯಾಮೆರಾಗಳಿವೆ ಅಲ್ಲಿ?
ಆದರು ಯಾರ ಬಯವಿಲ್ಲದೇ ಈ ಗರಗಸದ ಗುಂಪು ನಮ್ಮನ್ನು ಮೂರನೆಯ ನಿದ್ರಾ ಸ್ಥಿತಿಗೆ ತಳ್ಳಿದಂತೆ, ತಮ್ಮ ಕೃತ್ಯ ನಡೆಸಿದೆ.
“ ಮರ ಕಡಿಯೋದು ಕಾನೂನು ಬಾಹಿರ” ಎಂಬ ಸತ್ಯ ತಿಳಿದಿಲ್ಲವೇ?
ಹಾಗದರೆ ಅರಣ್ಯ ಅಧಿಕಾರಿಗಳ ಬಯವಿಲ್ಲವೆ.? ಪೋಲಿಸ್ ಅಧಿಕಾರಿಗಳ ಸಹಾಕರ ಅರಣ್ಯ ಅಧಿಕಾರಿಗಳು ತೆಗೆದು ಕೋಂಡು ಹುಡುಕಿ ಹಿಡಿದು ಶಿಕ್ಷಿಸಬೇಕು. ಮರವನ್ನು ಹತ್ತಿರದಿಂದ ನೋಡಿದವನು, ಮರವನ್ನು ಆಶ್ರಯಿಸಿದ್ದ ಹಕ್ಕಿಯೂ ಈ ಪ್ರಕರಣದಲ್ಲಿ ಸಾಕ್ಷಿ ಕೊಡಬೇಕಾದ ಪರಿಸ್ಥಿತಿ ಬಂದಿದೆ!
ಇಲ್ಲಿ ಒಂದು ವಿಷಯ ಸ್ಪಷ್ಟ: ನಗರದ ಒಳಜೀವಕ್ಕೆ ಹಸಿರು ಬೇಕು. ಪರಿಸರ ಪ್ರೀತಿಗೆ ಪ್ರೋತ್ಸಾಹ ಬೇಕು. ಮರಗಳಿಗೆ ರಕ್ಷಣೆ ಬೇಕು. ಈ ಪ್ರಕರಣಕ್ಕೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಾಳೆ ನಗರದಲ್ಲಿ ಇರುವ ಮರ ರಾತ್ರಿಮಯವಗಾಬಹುದು.
ಹೀಗಾಗಿ, ಮರಗಳ ಹತ್ಯೆ ಇದೀಗ ಸಧ್ಯದ ಸೋಷಿಯಲ್ ಕ್ರೈಮ್ ಆಗಿದೆ!
ಪರಿಸರ ಹತ್ಯೆ ಇಲ್ಲಿಗೆ ಕೊನೆಗಾಣಲಿ. ಮರ ಬಿಟ್ಟು ರಸ್ತೆ, ದಾರಿ ಇಲ್ಲ!