
ಶಿವಮೊಗ್ಗ ಬಾಪೂಜಿ ನಗರದ ಆರ್ ಎಕ್ಸ್ ಮೆಂಟಲ್ ಕಳ್ಳ ಸೂರಿ ಸೂರಿ ಎಂಬ ಯುವಕನನ್ನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ
ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಗಂಗಮ್ಮ ದೇವಸ್ಥಾನ ಬಳಿ ಸೂರಿ ಚಿಕನ್ ಅಂಗಡಿ ಇಟ್ಟಿದ್ದು ಇಂದು ಸಂಜೆ ಏಳರಿಂದ ಎಂಟು ಗಂಟೆ ಸುಮಾರಿಗೆ ಗಂಗಮ್ಮ ದೇವಸ್ಥಾನದ ಬಳಿಯಲ್ಲಿ ಹುಡುಗರ ಜೊತೆ ಮಾತನಾಡುತ್ತಾ ನಿಂತಿದ್ದ ಸುರೇಶ್ ಅಲಿಯಾಸ್ ಆರ್ ಏಕ್ಸ್ ಮೆಂಟಲ್ ಮೆಂಟಲ್ ಕಳ್ಳ ಸೂರಿ ಎಂಬಾತನ ಮೇಲೆ ಅಪರಿಚತರು ದಾಳಿ ನಡೆಸಿದ್ದಾರೆ.. ಬ್ಯಾಟ್ ಹಾಗು ವಿಕೆಟ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ಇತ್ತೀಚೆಗಷ್ಟೇ ಸೂರಿ ಜೈಲಿನಿಂದ ರಿಲೀಸ್ ಆಗಿ ಬಂದಿದ್ದ ಎನ್ನಲಾಗಿದೆ ಇನ್ನು ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಪೊಲೀಸ್ ಕೋಟೆ ಸ್ಟೇಷನ್ ಪೋಲೀಸರು ತೆರಳಿದ್ದು, ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ
ಘಟನೆಗೆ ಕುಟುಂಬ ಕಲಹ ಸಂಬಂಧ ಕಾರಣ ವಿರಬಹುದು ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ